ಅತಿಥಿ ದೇವೋಭವ ನಿಜ, ಹಾಗಾದ್ರೆ ಆತಿಥೇಯ?

ನಮ್ಮ ಸಂಸ್ಕ್ರತಿಯು ಸನಾತನ ಹಾಗು ಜಗನ್ಮಂಗಳಕರ. ಈ ಭವ್ಯವಾದ ಸಂಸ್ಕ್ರತಿಯ ಒಂದು ಭಾಗವೇ ಅತಿಥಿ ಸತ್ಕಾರ. ಮನೆಗೆ ಬಂದವರನ್ನು ಊಟೋಪಚಾರಗಳೊಂದಿಗೆ ಆದರಿಸಿ, ಸತ್ಕರಿಸುವ ಪದ್ಧತಿ ನಮ್ಮದು

PAKASH DSOUZA
11 Jan, 2022 1 min read min read kn
❤️ 0 💬 0 👁 994
ಅತಿಥಿ ದೇವೋಭವ ನಿಜ, ಹಾಗಾದ್ರೆ ಆತಿಥೇಯ?

ನಮ್ಮ ಸಂಸ್ಕ್ರತಿಯು ಸನಾತನ ಹಾಗು ಜಗನ್ಮಂಗಳಕರ. ಈ ಭವ್ಯವಾದ ಸಂಸ್ಕ್ರತಿಯ ಒಂದು ಭಾಗವೇ ಅತಿಥಿ ಸತ್ಕಾರ. ಮನೆಗೆ ಬಂದವರನ್ನು ಊಟೋಪಚಾರಗಳೊಂದಿಗೆ ಆದರಿಸಿ, ಸತ್ಕರಿಸುವ ಪದ್ಧತಿ ನಮ್ಮದು. ಅದು ಅಪರಿಚಿತರೇ ಇರಲಿ ಒಂದು ಲೋಟ ನೀರು ಕೇಳುವಾಗ ನಿರಾಕರಿಸದೆ ಅವನ ದಾಹವನ್ನು ಇಂಗಿಸುವುದು ನಮ್ಮ ಕರ್ತವ್ಯ. ಇಂತಹ ಒಳ್ಳೆ ಅಭ್ಯಾಸ ಹಿರಿಯರಿಂದ ನಮಗೆ ಬಂದ ಬಳುವಳಿ. ಮಾನವತೆಯ ಇನ್ನೊಂದು ರೂಪವೇ ಅತಿಥಿ ಸತ್ಕಾರ. ಅತಿಥಿಗಳನ್ನು ಆದರಿಸಿ, ಒಳ್ಳೆ ರೀತಿಯಿಂದ ಉಪಚರಿಸಬೇಕು ಅನ್ನುವ ಮಾತನ್ನು ಜೀವನದ ಹಲವು ಘಟ್ಟಗಳಲ್ಲಿ ನಾವು ಕೇಳಿರುತ್ತೆವೆ. ಆದರೆ ಇಲ್ಲಿ ನನ್ನ ಮನಸಿನೊಳಗೆ ಒಂದು ಪ್ರಶ್ನೆ ಮೂಡುತಿದೆ!  

ನಿಜ ನಾವು ಬಹುಶ್ಯ ತುಂಬಾ ವಿರಳವಾಗಿ ಆತಿಥೇಯನ ಬಗ್ಗೆ ಯೋಚಿಸಿರುತೇವೆ. ಯೋಚನೆ ಕೂಡ ಮಾಡೋದಿಲ್ಲ ಅಂತ ಹೇಳಿದ್ರು ತಪ್ಪೆನಿಸದು. ಇದು ವಾಸ್ತವ. ಅತಿಥಿ ದೇವೋಭವನಾದ್ರೆ, ಆತನನ್ನು ಆಧರಿಸಿ ಸತ್ಕರಿಸುವವನು ಕೂಡ ದೇವೋಭವನೇ ಅಲ್ವೇ ?

ಆದರೆ ಎಷ್ಟೋಬಾರಿ ನಮಗೆ ಈ ವಿಚಾರವೇ ಮರೆತು ಹೋಗಿರುತ್ತೆ. ಒಬ್ಬ ಮಿತ್ರ ತನ್ನ ಮಗಳ ಮದುವೆಗೆ ನಮ್ಮನ್ನು ಆಹ್ವಾನಿಸುತ್ತಾನೆ ಅಂತಿಟ್ಟುಕೊಳ್ಳುವ! ಆತ ಆ ಒಂದು ಮದುವೆ ಮಾಡಿ ಮುಗಿಸಲು ಅದೆಷ್ಟು ಶ್ರಮ ಪಡುತಿದ್ದನೋ ನಮಗೆ ಗೊತ್ತಿಲ್ಲ. ನಾವು ಅವನ ಮಿತ್ರರಾಗಿದ್ದಕ್ಕೆ, ನಮ್ಮನ್ನು ಪ್ರೀತಿಯಿಂದ ಆತ ಕರೆದಿರುತ್ತಾನೆ. ಆದರೆ ನಾವು ಏನು ಮಾಡುತೇವೆ ? ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತೇವೆ. ಊಟದ ಸಮಯಕ್ಕೆ ಹೋದರೆ ಸಾಕು ಎನ್ನುವ ತಾತ್ಸಾರ! ಎಲ್ಲ ಕಾರ್ಯ ಮುಗಿದ ಮೇಲೆ ಊಟಕ್ಕೆ ಹಾಜರಾಗುತ್ತೆವೆ. ಇದು ಒಂದು ವಿಧದಲ್ಲಿ ಅತಿಥೇಯನಿಗೆ , ನಮಗೆ ಆಮಂತ್ರಣ ಕೊಟ್ಟವನಿಗೆ ನಾವು ಮಾಡುವ ಅವಮಾನ ತಾನೇ. ಹಿಂದೆಲ್ಲ ಊರಿನ ಒಂದು ಮನೆಯಲ್ಲಿ ಮದುವೆ ಅಂದ್ರೆ ಅದೇನು ಸಂಭ್ರಮ. ಜಾತಿ ಭೇದದ ಲೆಕ್ಕಾಚಾರವಿಲ್ಲದೆ, ಬಹಳ ದಿನಗಳ ಮೊದಲೇ ಕೆಲಸ ಕಾರ್ಯಗಳಲ್ಲಿ ನೆರೆಹೊರೆಯವರು ಕೈ ಜೋಡಿಸುತಿದ್ರು. ಒಂದು ಮನೆಯ ಸಂಭ್ರಮ ಊರಿನ ಸಂಭ್ರಮ ವಾಗಿರುತಿತ್ತು. ಆದರೆ ಈಗಿನ ಯಾಂತ್ರಿಕ ಬದುಕಿನಲ್ಲಿ ಎಲ್ಲರಿಗೂ ಅವಸರ. ಸಂಭ್ರಮ ಅನ್ನುವುದು ಕೇವಲ ಮನೆಯವರಿಗೆ ಸೀಮಿತವಾಗಿದ್ದು , ಉಳಿದವರ ಆಗಮನ ಕೇವಲ ಕಾಟಾಚಾರಕ್ಕೆ ಅನ್ನುವಂತಾಗಿಬಿಟ್ಟಿದೆ.

ಇದು ಮದುವೆ ಮಾತ್ರ ಅಂತ ಅಲ್ಲ. . ಮನೆಯಲ್ಲಿ ಒಂದು ಒಳ್ಳೆ ಕಾರ್ಯ ಇಟ್ಟುಕೊಳ್ಳುತೇವೆ. ನಾವು ನಮ್ಮ ಆತ್ಮೀಯರು ಅಂತ  ಅನಿಸಿಕೊಂಡವರನ್ನು ಕರೆಯುತೇವೆ. ನೋಡಪ್ಪ ಮನೆಯಲ್ಲಿ 7 ಗಂಟೆಗೆ ಇಂತಹ ಕಾರ್ಯ ಇದೆ. ಸಲ್ಪ ಸಮಯಕ್ಕೆ ಮುಂಚೆಯೇ ಬಂದು ಸುಧಾರಿಸಕೊಡಬೇಕು ಅಂತ ಕೇಳಿಕೊಳ್ಳುತೇವೆ. ಮನೆಯಲ್ಲಿ ಒಂದು ಕಾರ್ಯ ಅಂತ ಹೇಳಿದ ಮೇಲೆ ಅದು ದೊಡ್ಡದಿರಲಿ , ಇಲ್ಲವೇ ಚಿಕ್ಕದಿರಲಿ ಅಲ್ಲಿ ಅಪಾರ ಶ್ರಮ ಇರುತ್ತೆ. ಮುಂಜಾನೆ ಎದ್ದು ಅಡುಗೆಯಿಂದ ಹಿಡಿದು ಪ್ರತಿ ಕಾರ್ಯಗಳನ್ನು ಮಾಡಿ ಮುಗಿಸುವಷ್ಟರಲ್ಲಿ ಸಾಕು ಬೇಕಾಗುತ್ತದೆ. ಸಂಜೆ ಹೇಳಿದ ಸಮಯಕ್ಕೆ ಕಾರ್ಯಕ್ರಮ ಶುರುವಾಗಿ , ಸರಿಯಾದ ಹೊತ್ತಿನಲ್ಲಿ ಮುಗಿದರೆ ಮನಸಿಗೆ ಸಮಾಧಾನ. ಆದರೆ ಅತಿಥಿಗಳು ಏನು ಮಾಡುತ್ತಾರೆ ಗೊತ್ತ ? ಆತಿಥೇಯ ಕಾಯುತ್ತ ಕೂತಿರುತ್ತಾನೆ ಅತಿಥಿಗಳಿಗೆ. ಆದರೆ ನಮ್ಮ ಅತಿಥಿಗಳು ಹೇಗೂ ಊಟಕ್ಕೆ ಹೋದರೆ ಸಾಕು ಅಂತ 9 ಗಂಟೆಯ ನಂತರ ಬರುತ್ತಾರೆ.

ಇಲ್ಲಿ ಅತಿಥೇಯನ ಭಾವನೆಗಳಿಗೆ, ಅವನ ಪ್ರೀತಿಗೆ ನಾವು ಗೌರವ ಕೊಡೋದಿಲ್ಲ. ಪ್ರತಿ ಅತಿಥಿಯೂ, ತಾನು ಕೂಡ ಕೆಲವೊಮ್ಮೆ ಆತಿಥೇಯ ನಾಗಬಹುದು ಎನ್ನುವುದನ್ನೇ ಮರೆತುಬಿಟ್ಟವರಂತೆ ವರ್ತಿಸುತ್ತಾರೆ. ಹೇಗೆ ಅತಿಥಿ ದೇವೋಭವನೋ ಹಾಗೆ ಅತಿಥೇಯನೂ ಕೂಡ ದೇವೋಭವ. ನಾವು ಒಬ್ಬರ ಮನೆಗೆ ಹೋದಾಗ, ಆ ಮನೆಯವರ ಭಾವನೆಗಳಿಗೆ , ಸಂಪ್ರದಾಯಕ್ಕೆ ಗೌರವ ಕೊಡಬೇಕು. ಅತಿಥೇಯನ ಮನೆಯ ಬಗ್ಗೆ , ಕುಟುಂಬದ ಬಗ್ಗೆ ಕೊಂಕು ನುಡಿದು, ಅವರನ್ನು ಅವಮಾನಿಸಬಾರದು. ನಮ್ಮ ವರ್ತನೆ ಕೂಡ ಹತೋಟಿಯಲ್ಲಿರಬೇಕು. ಅತಿಥಿಯಾಗಿ ಹೋಗಿ , ನಮ್ಮ ಅದಿಕಾರವನ್ನು ಚಲಾಯಿಸಲು ಪ್ರಯತ್ನ ಪಡಬಾರದು. ಉದಾಹರಣೆಗೆ ಒಬ್ಬ ಗೆಳೆಯನ ಮನೆಗೆ ಹೋಗುತೇವೆ ಅಂದಿಟ್ಟುಕೊಳ್ಳಿ. ನಮ್ಮ ಮತ್ತು ಅವನ ವಯಕ್ತಿಕ ಸ್ನೇಹ ಅದೇನೇ ಇರಲಿ. ಅವನ ಮನೆಯಲ್ಲಿ ಅವನಿಗೊಂದು ಸ್ಥಾನ ಇರುತ್ತದೆ. ಅವನ ಹೆಂಡತಿಯ , ಮಕ್ಕಳ , ತಂದೆ ತಾಯಿಯ ದ್ರಷ್ಟಿಯಲ್ಲಿ ಅವನ ಬಗ್ಗೆ ಒಂದು ಗೌರವ ಹೆಮ್ಮೆ ಇರುತ್ತೆ. ಅವನಲ್ಲಿ ನಾವು ಅತಿಥಿಯಾಗಿ ಹೋಗಿ ಅವನ ಗೌರವಕ್ಕೆ ಕುಂದುಂಟು ಮಾಡುವ ವಿಚಾರಗಳನ್ನು ಹೇಳಿಕೊಳ್ಳುವುದು ಒಳ್ಳೇದಲ್ಲ.

ಅತಿಥಿ ದೇವರಂತೆ ಅಂತ ಹೇಳಿಕೊಂಡು ಬೇಕಾ ಬಿಟ್ಟಿ ವರ್ತಿಸಿದರೆ ಹೇಗೆ ? ಅತಿಥಿಯಾಗಿ ಹೋಗಿದ್ದಾಗ , ಅತಿಥಿಯಂತೆ ನಮ್ಮ ವರ್ತನೆ ಇರಬೇಕು. ಅದು ನಮ್ಮ ಮನೆಯಲ್ಲ ಎನ್ನುವುದು ನಮ್ಮ ಮನಸಿನಲ್ಲಿರಬೇಕು. ಅತಿಥಿಯಂತೆ, ಅತಿಥೇಯನೂ ಕೂಡ ದೇವೋಭವ ಎನ್ನುವುದನ್ನು ನಾವು ಮೆರೆಯಬಾರದು.

 

ಪ್ರಕಾಶ್ ಮಲೆಬೆಟ್ಟು

0 likes

Support PAKASH DSOUZA

Appreciate this story? Send a small tip to encourage the author to write more great work!

Please login to tip the author.

PAKASH DSOUZA
Published By

PAKASH DSOUZA

@pakashdsouza

Comments

Appreciate the author by telling what you feel about the post 💓

Please Login or Create a free account to comment.

Recommended For You

Stories tailored to your recent reading preferences

More stories in Self-help
Xleem 01 Jul, 2026 1 min read min

Life

Life is a long journey, and most of us spend it chasing what we lack, while forgetting to be grateful for what we already hold.

93 0
More stories in Self-help
Xleem 01 Jul, 2026 1 min read min

Li3f

Just read it

84 1
More stories in Self-help
Abdul Aleem nsk 29 Jun, 2025 3 mins read min

"The Boy Who Held Storms in Silence" (Fiction)

A silent boy, crushed by cruelty and unseen by the world, carries his pain alone—until it quietly ends him.

495 0
More stories in Self-help
fazal Esaf 02 Jun, 2025 1 min read min

एक मुस्लिम गरीब लड़के की कहानी जो पढ़ना चाहता है

यह कहानी रहीम नाम के एक गरीब और मेहनती मुस्लिम लड़के की है, जिसके जीवन में कम उम्र में ही मुश्किलों का पहाड़ टूट पड़ता है। जब वह सिर्फ तीन साल का था, तभी उसके अब्बा का इंतकाल हो जाता है, और घर की सारी ज़िम्मेदारी उसकी अम्मी, सकीना, पर आ जाती है। सकीना दूसरों के घरों में मेड का काम करती है, लेकिन उसकी कमाई इतनी कम होती है कि दो वक्त की रोटी भी मुश्किल से मिलती है, और रहीम को स्कूल भेजने का सपना अधूरा रह जाता है। इसके बावजूद, रहीम के अंदर पढ़ने की गहरी लगन है। उसकी आँखें ज्ञान की दुनिया को देखने का सपना देखती हैं और वह अपनी अम्मी को गरीबी और दूसरों के घरों में काम करने की मजबूरी से आज़ाद कराना चाहता है। अपनी इस इच्छा को पूरा करने के लिए, रहीम छोटी उम्र में ही काम करना शुरू कर देता है। वह शहर की एक छोटी सी परचून की दुकान पर दिन भर ईमानदारी और लगन से काम करता है। शाम होते ही, रहीम अपनी थकान को दरकिनार करते हुए पास के 'शाम के मदरसे' में पढ़ने चला जाता है, जहाँ गरीब बच्चों को मुफ्त शिक्षा दी जाती है। मदरसे से लौटने के बाद भी वह अपनी अम्मी की मदद करता है, घर के कामों में हाथ बँटाता है। रविवार का दिन उनके लिए खास होता है, जब रहीम अपनी अम्मी से अपने बड़े-बड़े सपने साझा करता है – खूब पढ़कर बड़ा आदमी बनना और अम्मी को आराम भरी ज़िंदगी देना। कहानी इस बात पर भी जोर देती है कि कैसे रहीम अपनी विपरीत परिस्थितियों के बावजूद अच्छी आदतों को बनाए रखता है। जहाँ उसके आस-पास के कई लड़के गरीबी से हार मानकर गलत रास्तों पर चले जाते हैं, वहीं रहीम न केवल खुद ईमानदार और नेक रहता है, बल्कि अपने दोस्तों और पड़ोस के लड़कों को भी पढ़ाई की अहमियत समझाता है और उन्हें सही रास्ता दिखाता है। वह उन्हें बताता है कि शिक्षा ही गरीबी से निकलने का एकमात्र ज़रिया है, न कि बुरे काम। यह कहानी मेहनत, लगन और नैतिक मूल्यों का एक सशक्त उदाहरण प्रस्तुत करती है, जो दर्शाती है कि दृढ़ इच्छाशक्ति और सही दिशा में प्रयास से कोई भी व्यक्ति अपनी मुश्किलों को पार कर सकता है।

866 0